ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಡಿಕೇರಿ ವತಿಯಿಂದ ಜೋಡುಪಾಲದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು.

ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಕೃಷಿ ಮೇಲ್ವಿಚಾರಕರಾದ ಅಶ್ವಥ್ ರವರ ಮತ್ತು ಮೇಲ್ವಿಚಾರಕರಾದ ಸುನಿಲ್ ರವರ ಮಾರ್ಗದರ್ಶನದಲ್ಲಿ ಗಿಡ ನಾಟಿ ಶ್ರಮದಾನ ನಡೆಸಿದರು.
ಶಾಲೆಯ ಶಿಕ್ಷಕರಾದ ಶ್ರೀಮತಿ ದಮಯಂತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್ ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರಿಸರ ರಕ್ಷಣೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.

ಘಟಕದ ಸದಸ್ಯರಾದ ಸಬೀನಾ, ವಿಮಲ, ಜಯಂತಿ, ಜನಾರ್ಧನ, ಮಾಧವ, ಗಣೇಶ, ಸಂತೋಷ, ಪೂವಯ್ಯ ಭಾಗವಹಿಸಿದ್ದರು.