ಮಾರ್ಚ್, 19, 2024: ಬೆಟ್ಟoಪಾಡಿ ಗ್ರಾಮದ ನುಳಿಯಲು ದೇರಣ್ಣ ರೈ ಎಂಬವರ ಮನೆಯ ತೋಟದಲ್ಲಿ ಮೆಯಲು ಬಿಟ್ಟ ಹಸು ಒಂದು ಇಂದು ತೋಟದಲ್ಲಿ ಇದ್ದ ಸುಮಾರು 30 ಅಳದ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ. ಕುಡಿಯುವ ನೀರಿನ ಬಾವಿಯಲ್ಲಿ ನೀರು ಕೂಡ ತುಂಬಿಕೊಂಡಿದ್ದು ತುರ್ತು ಹಸುವನ್ನು ಮೇಲಕ್ಕೆತ್ತದೇ ಇದ್ದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿತ್ತು.
![](https://skdrdpdisastermanagement.org/wp-content/uploads/2024/03/WhatsApp-Image-2024-03-19-at-7.56.07-PM-min-1024x768.jpeg)
ವಿಷಯ ತಿಳಿದ ಕೂಡಲೇ ಬೆಟ್ಟಂಪಾಡಿ ಘಟಕದ ಸ್ವಯಂ ಸೇವಕರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿರುತ್ತಾರೆ. ತಂಡದಲ್ಲಿ ತರಬೇತಿ ಪಡೆದ ಮೂರು ಜನ ಬಾವಿಗೆ ಇಳಿದು ಹಗ್ಗ ಇಳಿಸಿ ಹಸುವಿನ ದೇಹಕ್ಕೆ ಕಟ್ಟಿ ನಾಲ್ಕು ಜನ ಸ್ವಯಂ ಸೇವಕರು ಮತ್ತು ಊರಿನ ಜನ ಸೇರಿ ನಿಧಾನವಾಗಿ ಎಳೆದು ಸುಮಾರು ಮೂರು ಗಂಟೆಗಳ ಕಾರ್ಯಚರಣೆಯ ಬಳಿಕ ಹಸುವನ್ನು ಮೇಲಕ್ಕೆತ್ತಲಾಯಿತು.
![](https://skdrdpdisastermanagement.org/wp-content/uploads/2024/03/WhatsApp-Image-2024-03-19-at-7.56.26-PM-min-1024x768.jpeg)
ಈ ಕಾರ್ಯಚರಣೆ ಊರಿನವರ ಪ್ರಸಂಸೆಗೆ ಪಾತ್ರವಾಯಿತು. ಸ್ವಯಂಸೇವಕರಾದ ಮನೋಜ್,ಸತೀಶ, ಸುಬ್ರಮಣ್ಯ,ಆನಂದ, ಅಶೋಕ, ಪ್ರವೀಣ, ಮನೋಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.