ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ಮುಡ ಇದರ ಸಹಭಾಗಿತ್ವದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ವೇಣೂರು ಸಿಎ ಬ್ಯಾಂಕಿನ ುಉಪಾಧ್ಯಕ್ಷರಾದ ರತ್ನಾಕರ ಬಿ. ಗಿಡ ನಾಟಿಗೆ ಚಾಲನೆ ನೀಡಿದರು. ಶಾಲೆಯ ಪರಿಸರದಲ್ಲಿ ಗಿಡ ನಾಟಿ ಮಾಡಲಾಯಿತು. ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ನಿಟ್ಟಾಡೆ ಇದರ ಸ್ವಯಂಸೇವಕರು ಗಿಡ ನಾಟಿ ಶ್ರಮದಾನ ನಡೆಸಿದರು.
ವಲಯ ಮೇಲ್ವಿಚಾರಕರಾದ ಯಶೋಧ, ಕೃಷಿ ಮೇಲ್ವಿಚಾರಕ ಕೃಷ್ಣ, ಒಕ್ಕೂಟದ ಪದಾದಿಕಾರಿಗಳು, ಶೌರ್ಯ ತಂಡದ ಸಂಯೋಜಕರು, ಘಟಕ ಪ್ರತಿನಿಧಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.