ಶಾಲೆಯ ಕುಡಿಯುವ ನೀರಿನ ಬಾವಿ ಸ್ವಚ್ಚತೆ; ಅಜೆಕಾರು ಶೌರ್ಯ ತಂಡದಿಂದ ಶ್ರಮದಾನ
ಹೆಬ್ರಿ ತಾಲ್ಲೂಕಿನ ದಾಸಗದ್ದೆ ಪ್ರಾಥಮಿಕ ಶಾಲೆಯ ಶಿಕ್ಷಕರ ಮನವಿಯ ಮೇರೆಗೆ ಕುಡಿಯುವ ನೀರಿನ ಬಾವಿಯ ಸ್ವಚ್ಚತೆ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಜೆಕಾರು ಘಟಕದ ಸ್ವಯಂಸೇವಕರು ನಡೆಸಿದರು.
ಸ್ವಯಂಸೇವಕರಾದ ವಿಜಯ ಕಾಮತ್, ಅಕ್ಷಯ್, ಪ್ರವೀಣ್, ರಾಜೇಶ್, ಅಶೋಕ್, ಕೃಷ್ಣ, ರೇಷ್ಮಾ ಹಾಗೂ ಸುಲೋಚನ ಭಾಗವಹಿಸಿದರು.