ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮದ ಮಹಿಳಾ ಸಮಾಜದ ಕಟ್ಟಡದ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ನಡೆಸಿದರು.

ಮಹಿಳಾ ಸಮಾಜದ ಅಧ್ಯಕ್ಷರು ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಮಹಿಳಾ ಸಮಾಜ ಕೇಂದ್ರ ದ ಸುತ್ತು ಮುತ್ತು ಸ್ವಚ್ಛತೆ ಮಾಡಲು ಸಹಕಾರ ನೀಡುವಂತೆ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಶ್ರಮದಾನ ನಡೆಸಲಾಗಿದೆ.
ಘಟಕದ ಸದಸ್ಯರಾದ ದಿವ್ಯ, ಉಮಾಲಕ್ಷ್ಮಿ, ಶ್ಯಾಮಲಾ, ಚಂದ್ರಕಲಾ,ರಶ್ಮಿ,ಸೀನ ಮಾಧವನ್, ಶಂಕರ, ದಿಲಿಶ್,ಸುರೇಶ್, ಕೃಷ್ಣ, ಆನಂದ, ವಿಕಾಸ್ ಭಾಗವಹಿಸಿದ್ದರು.
