ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಅಂಕೋಲಾ ತಾಲೂಕು ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೆಳಸೆ ಯಲ್ಲಿ ಹಣ್ಣು ಹಂಪಲು ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಅಂಕೋಲಾ ತಾಲ್ಲೂಕು ಯೋಜನಾಧಿಕಾರಿಯವರಾದ ಶ್ರೀಮತಿ ಮಮತಾ ನಾಯ್ಕ್ ರವರು ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಂಕೋಲಾ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಅಂಕೋಲಾ ಮತ್ತು ಮಾಧವ ನಗರ ಘಟಕದ ಸ್ವಯಂಸೇವಕರು ಗಿಡ ನಾಟಿ ಶ್ರಮದಾನದಲ್ಲಿ ಭಾಗವಹಿಸಿ ಗಿಡ ನಾಟಿ ಮಾಡಿದರು.

ಒಕ್ಕೂಟದ ಅಧ್ಯಕ್ಷರಾದ ಸೋಮಿಟಿ ಗೌಡ, ನಿವೃತ್ತ ಸಿಡಿ ಪ್ರೈ T K ಗೌಡ, ನಾಟ್ಯ ವೈದ್ಯ ಗುರುಗೌಡ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಶೋಭಾ ಬಿರಣ್ಣ ನಾಯಕ್ ಪ್ರಾಂಶುಪಾಲರು ಕಿತ್ತೂರು ರಾಣಿ ಚೆನ್ನಮ್ಮ ಸ್ಕೂಲ್ ಹಾಗೂ ಸಿಬ್ಬಂದಿಗಳು, ವಲಯದ ಮೇಲ್ವಿಚಾರಕರಾದ ದತ್ತಾತ್ರೇಯ ಮತ್ತು ಕೃಷಿ ಅಧಿಕಾರಿಯವರಾದ ಚಿದಾನಂದ ಹಾಗೂ ಬೆಳೆಸೇ ಸೇವಾ ಪ್ರತಿನಿಧಿ ಶಿವು ಗೌಡ ಉಪಸ್ಥಿತರಿದ್ದರು.

ಸ್ವಯಂಸೇವಕರಾದ ಸುಮತಿ ನಾಯ್ಕ್, ಪ್ರಕಾಶ ಆಗೇರ, ನಾಗರಾಜ್ ಐಗಳ್, ರಾಜೇಶ್ ಆಗೇರ್,ಅಶೋಕ ಆಗೇರ, ಪ್ರವೀಣ್ಆಗೇರ,ಸಂತೋಷ ಗೌಡ, ವಿಠ್ಠಲ ಆಗೇರ ಪಾಲ್ಗೊಂಡರು.