ಹೆಬ್ರಿ ತಾಲ್ಲೂಕಿನ ಮರ್ಣೆ ಗ್ರಾಮ ಪಂಚಾಯತ್ ವತಿಯಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಜೆಕಾರು ಘಟಕದ ಸ್ವಯಂಸೇವಕರು ಭಾಗವಹಿಸಿ ಸ್ವಚ್ಚತೆ ನಡೆಸಿದರು.

ಅಜೆಕಾರು ಪೇಟೆಯಿಂದ ಎಣ್ಣೆಹೊಳೆವರೆಗೆ 4 ಕಿಲೋಮೀಟರ್ ಉದ್ದದ ಹೆದ್ದಾರಿಯ ಬದಿಗಳಲ್ಲಿ ಕಸವನ್ನು ತೆರವುಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ನೈರ್ಮಲ್ಯದ ಅರಿವು ಮೂಡಿಸಲಾಯಿತು.

ಘಟಕದ ಸ್ವಯಂಸೇವಕರಾದ ವಿಜಯ ಕಾಮತ್, ಪ್ರವೀಣ್, ಕೃಷ್ಣ, ಅಶೋಕ, ಮಲ್ಲಿಕಾ, ರೇಷ್ಮಾ, ಸುಮಿತ್ರ ಹಾಗೂ ಸುಲೋಚನಾ ಶ್ರಮದಾನದಲ್ಲಿ ಭಾಗವಹಿಸಿದ್ದರು.