ಕಡಬ, ನವೆಂಬರ್ 15,2023: ಕಡಬ ತಾಲ್ಲೂಕಿನ ನೆಲ್ಯಾಡಿಯ ಗುಂಡ್ಯ ನದಿಯಲ್ಲಿ ಈಜಲು ಹೋದ ಯುವಕ ನೀರು ಪಾಲಾದ ಘಟನೆ ನಡೆದಿದೆ.
![](https://skdrdpdisastermanagement.org/wp-content/uploads/2023/11/WhatsApp-Image-2023-11-16-at-6.33.11-AM-min-768x1024.jpeg)
ಸಿರಿಬಾಗಿಲು ಗ್ರಾಮದ ಬರ್ಚಿನಾಳ ನಿವಾಸಿ ಸೋಮಶೇಖರ್(43) ಸಾವನ್ನಪ್ಪಿದವರು. ನವೆಂಬರ್ 14 ರಂದು ಸಂಜೆ ಗುಂಡ್ಯ ಹೊಳೆಗೆ ಸ್ನಾನಕ್ಕೆ ಹೋಗಿದ್ದ ವೇಳೆಗೆ ಕಾಲು ಜಾರಿ ನೀರಿಗೆ ಬಿದ್ದು ಕಣ್ಮರೆಯಾಗಿದ್ದು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಗುಂಡ್ಯ ಇದರ ಸ್ವಯಂಸೇವಕರು ಸುರೇಶ್ ಇವರ ನೇತೃತ್ವದಲ್ಲಿ ಅಗ್ನಿಶಾಮಕ ಇಲಾಖೆಯ ಜೊತೆಯಾಗಿ ಕಾರ್ಯಾಚರಣೆ ನಡೆಸಿದ್ದರು. ಮೃತದೇಹ ಮದ್ಯಾಹ್ನ 3.30 ರ ವೇಳೆಗೆ ಪತ್ತೆಯಾಗಿದ್ದು ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.