ಕಾಸರಗೋಡು ತಾಲ್ಲೂಕಿನ ಮವ್ವಾರು, ತಲೆಬೈಲು ವಡಂಬಳೆ ರಸ್ತೆಯಲ್ಲಿ, ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಗುಡ್ಡ ಜರಿದು ಮಣ್ಣು ರಸ್ತೆಗೆ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ವಿಷಯ ತಿಳಿದ ಸ್ವಯಂಸೇವಕರು ಸ್ಥಳಕ್ಕೆ ತೆರಳಿ ಸಂಜೆಯ ವೇಳೆಯಾದರೂ ಹಿಂಜರಿಯದೇ ಮಣ್ಣು ತೆರವು ಮಾಡುವ ಕೆಲಸವನ್ನು ಮಾಡಿರುತ್ತಾರೆ.
ಘಟಕ ಪ್ರತಿನಿಧಿ ಅಜಯ್, ಪದ್ಮನಾಭ (ಮಾಸ್ಟರ್) ಕೊರಗಪ್ಪ,ಸುರೇಶ, ಪ್ರಕಾಶ, ಆನಂದ, ಶಶಿಧರ, ಸಿಂಧು, ಉಮೇಶ, ನಾಗೇಶ ಉಪಸ್ಥಿತರಿದ್ದರು.