ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ಮಡಂತ್ಯಾರು ಘಟಕದ ಸ್ವಯಂಸೇವಕರು ಶಾಲಾ ಆವರಣದಲ್ಲಿ ಹಣ್ಣು ಹಂಪಲು ಗಿಡ ನಾಟಿ ಮಾಡಿದರು.

ಬೆಳ್ತಂಗಡಿ ತಾಲ್ಲೂಕಿನ ಕೆ. ಪಿ. ಎಸ್. ಶಾಲೆ ಪುಂಜಾಲಕಟ್ಟೆ ಆವರಣದಲ್ಲಿ ಗಿಡ ನಾಟಿ ಮಾಡಲಾಯಿತು.
ಮಡಂತ್ಯಾರು ಘಟಕದ ಸದಸ್ಯರಾದ ಭರತ್ ಕುಮಾರ್ , ದಯಾನಂದ ಹಚ್ಚಬೆ, ಯೋಗೀಶ್ ಕುಮಾರ್, ,ದೀಪಕ್ ಹಾರಬೆ,,,ಶಕುಂತಲಾ, ಶ್ರೀಮತಿ ರಾಜೇಶ್ವರಿ , ಸತೀಶ್ ಆಚಾರ್ಯ, ಸಂಯೋಜಕಿ ಶ್ರೀಮತಿ ಹರಿಣಾಕ್ಷೀ ಗಿಡಗಳ ನಾಟಿ ಕಾರ್ಯದಲ್ಲಿ ಭಾಗವಹಿಸಿದರು.
ಶಾಲಾ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಜನಜಾಗ್ರತಿ ವಲಯ ಅಧ್ಯಕ್ಷರು, ಸ್ಥಳೀಯ ಕಾರ್ಯಕ್ಷೇತ್ರದ ಸೇವಪ್ರತಿನಿಧಿಗಳು ಉಪಸ್ಥಿತರಿದ್ದರು.