ಶ್ರೀ ಧರ್ಮಸ್ಥಳ ಶೌರ್ಯ ಘಟಕ ಕಾಡಬೆಟ್ಟು ವಗ್ಗ ಸದಸ್ಯರು ದೊಂಪದ ಪಲಿಕೆ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಸರಿಪಡಿಸಲು ನಿರ್ಧರಿಸಿ ಶ್ರಮದಾನ ನಡೆಸಿದರು.

ಗುಂಡಿ ಬಿದ್ದ ರಸ್ತೆಯಲ್ಲಿ ಜಲ್ಲಿ ಪುಡಿಯನ್ನು ಹಾಕಿ ವಾಹನ ಸಂಚಾರಕ್ಜೆ ಅನುಕೂಲವಾಗುವಂತೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಪ್ರಕಾಶ್ ಗಟ್ಟಿ, ಡಾ. ರಾಮಕೃಷ್ಣ ರವರು ಉಪಸ್ಥಿತರಿದ್ದರು. ಘಟಕ ಪ್ರತಿನಿಧಿ ಪ್ರವೀಣ್. ಸದಸ್ಯರುಗಳಾದ ಸಂಪತ್ ಶೆಟ್ಟಿ ಜನಾರ್ಧನ, ಅಶೋಕ ಬೊಲ್ಮಾರ್ , ಚಿದಾನಂದ ಶೆಟ್ಟಿ ಉಪಸ್ಥಿತರಿದ್ದರು.
