ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಡಬೆಟ್ಟು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಸೇತುವೆಯ ಮೇಲಿನ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಕಾಡಬೆಟ್ಟುವಿನಲ್ಲಿರುವ ಸೇತುವೆಯ ಮೇಲೆ ಹುಲ್ಲು ಬೆಳೆದು, ಕಸ ಕಡ್ಡಿ, ಮಣ್ಣು ಇದ್ದು ತೆರವುಗೊಳಿಸುವ ಅಗತ್ಯವಿತ್ತು. ನಿತ್ಯ ವಾಹನಗಳು ಸಂಚರಿಸುವ ಈ ಸೇತುವೆಯ ರಸ್ತೆಯನ್ನು ಸ್ವಚ್ಚಗೊಳಿಸಲು ನಿರ್ಧರಿಸಿದ ಶೌರ್ಯ ಸ್ವಯಂಸೇವಕರು ಶ್ರಮದಾನ ನಡೆಸಿದರು.

ಶೌರ್ಯ ತಾಲೂಕು ಸಮಿತಿಯ ಮಾಸ್ಟರ್ ಪ್ರವೀಣ್ , ಸಂಯೋಜಕೀ ರೇಖಾ ಪಿ , ಘಟಕ ಪ್ರತಿನಿಧಿ ಸಂಪತ್ ಶೆಟ್ಟಿ, ಸದಸ್ಯರುಗಳಾದ , ಆಶೋಕ್ ಬೊಲ್ಮರ್,ವಿನೋದ್ ಮತ್ತು ರೋಹಿತ್ ಶ್ರಮದಾನದಲ್ಲಿ ಭಾಗವಹಿಸಿದ್ದರು.