
ಬ್ರಹ್ಮಾವರ ತಾಲ್ಲೂಕಿನ ಯಕ್ಷಿ ಮಠ ಅಂಗನವಾಡಿ ಕೇಂದ್ರದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಅಂಗನವಾಡಿ ಮೇಲ್ಛಾವಣಿ ಯನ್ನು ಸ್ವಚ್ಛತೆಯನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಾಂಡೇಶ್ವರದ ಸದಸ್ಯರು ನಡೆಸಿದರು.
ಮಳೆಗಾಲದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಟೆರೇಸ್ ಮೇಲ್ಭಾಗದಲ್ಲಿ ಸ್ವಚ್ಚತೆಯ ಅಗತ್ಯತೆಯನ್ನು ಮನಗಂಡ ಸ್ವಯಂಸೇವಕರು ಶ್ರಮದಾನ ಮಾಡಿದ್ದಾರೆ.
ಅಂಗನವಾಡಿ ಮೇಲ್ವಿಚಾರಕರು ಭಾಗೀರಥಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ, ಅಂಗನವಾಡಿ ಸಹಾಯಕಿ ಕುಮಾರಿ ಅನುಷಾ, ಗುಂಡ್ಮಿ ಒಕ್ಕೂಟದ ಸದಸ್ಯ ರಾಜುಮಾರ ಕಲಾ, ಗುಂಡ್ಮಿ ಒಕ್ಕೂಟದ ಸೇವಾಪ್ರತಿನಿಧಿ ಶಶಿಕಲಾ ರವರು ಉಪಸ್ಥಿತರಿದರು.

ಶೌರ್ಯ ಘಟಕದ ಸದಸ್ಯರಾದ ಕಾಳಿಂಗ ಪೂಜಾರಿ, ರಾಜೇಶ್ ಕೆ.ವಿ, ಯೋಗೀಶ್ ಆಚಾರ್ಯ,ಸಂತೋಷ ಶ್ರಮದಾನದಲ್ಲಿ ಭಾಗವಹಿಸಿದ್ದರು.